
ಮೈಸೂರು(24.1.2021): ಪೋಷಕರು ತನಗಿಂತಲೂ ತನ್ನ ಅಕ್ಕನ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಾರೆ ಎಂಬ ಕಾರಣಕ್ಕಾಗಿ ಮನನೊಂದ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ಶನಿವಾರ ನಡೆದಿದೆ.
ನೇತಾಜಿನಗರದ ನಿವಾಸಿ ನಾರಾಯಣ್ ಎಂಬವರ ಪುತ್ರಿ 23 ವರ್ಷದ ಪುತ್ರಿ ಭಾವನ ಎಂಬವರೇ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಪೋಷಕರು ತನ್ನ ಅಕ್ಕನಿಗೆ ಒಡವೆ, ಬಟ್ಟೆ ಏನೇ ಕೊಡಿಸಬೇಕು ಎಂದರು ಆಕೆಯನ್ನು ಕೇಳಿ ಇಲ್ಲ ಅವಳನ್ನೂ ಕರೆದುಕೊಂಡು ಹೋಗಿ ಕೊಡಿಸುತ್ತಾರೆ. ಆದರೆ, ನನಗೆ ಏನು ಬೇಕು, ಯಾವ ತರದ ಒಡವೆ ಬೇಕು, ಬಟ್ಟೆಬೇಕು ಎಂಬುವುದನ್ನೇ ಕೇಳುವುದಿಲ್ಲ. ಅವರು ತಂದುಕೊಟ್ಟದನ್ನು ಹಾಕಿಕೊಳ್ಳಬೇಕು ಎಂಬ ಬೇಸರದಿಂದ ಶನಿವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ನಗರದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.